
2nd June 2025
ಬೆಂಗಳೂರು : ನಾಟ್ಯೇಶ್ವರ ನೃತ್ಯ ಶಾಲೆ ಹಾಗೂ ನೃತ್ಯ ಕುಟೀರ ಇವುಗಳ ಸಂಯುಕ್ತಾಶ್ರಯದಲ್ಲಿ ಮೇ ೩೧ರಂದು ಮಲ್ಲೇಶ್ವರ ಶ್ರೀಕೃಷ್ಣದೇವರಾಯ ಕಲಾಮಂದಿರ(ತೆಲುಗು ವಿಜ್ಞಾನ ಸಮಿತಿ)ದಲ್ಲಿ ಗುರು ಕೆ.ಪಿ ಸತೀಶ್ ಬಾಬುರವರ ಹಿರಿಯ ವಿದ್ಯರ್ಥಿನಿ ಕು|| ಕೆ. ಹರಿಣಿ ಹಾಗೂ ನೃತ್ಯ ಕುಟೀರದ ಗುರು ವಿ|| ಲಿಖಿತಾರವರ ಶಿಷ್ಯೆ ಕು|| ಕೆ. ಪ್ರಗತಿ ಇವರುಗಳ ಭರತನಾಟ್ಯ ರಂಗಪ್ರವೇಶ ಕರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿಬಂತು.
ವಾದ್ಯವೃಂದದಲ್ಲಿ : ಗುರುಗಳಾದ ಕಲಾಯೋಗಿ ಶ್ರೀ ಕೆ.ಪಿ. ಸತೀಶ್ ಬಾಬು ಮತ್ತು ವಿ|| ಯು.ಕೆ. ಲಲಿತಾ (ನಟುವಾಂಗ), ವಿದ್ವಾನ್ ಶ್ರೀವತ್ಸ (ಹಾಡುಗಾರಿಕೆ), ವಿ|| ಪಿ. ಜನರ್ದನ (ಮೃದಂಗ), ವಿ|| ಆರ್ ಪಿ ಪ್ರಶಾಂತ್ (ವೀಣೆ), ವಿ|| ರಘುಸಿಂಹ {ಕೊಳಲು}, ವಿ|| ಧನುಷ್ (ರಿದಂ ಪ್ಯಾಡ್). ಕರ್ಯಕ್ರಮ ನರ್ವಹಣೆ ಮತ್ತು ನಿರೂಪಣೆ ವಾಣಿ ಸತೀಶ್ ಬಾಬು. ಪಾರಂಪರಿಕ ನೃತ್ಯ ಬಂಧಗಳಾದ ಪುಷ್ಪಾಂಜಲಿ, ವಿನಾಯಕ ಸ್ತುತಿ, ಗುರುಶ್ಲೋಕ, ರಸಿಕಪ್ರಿಯ, ಜತಿಸ್ವರ, ದಶಾವತಾರ, ವೆಂಕಟೇಶ್ವರ ಪದರ್ಣ, ಶಿವಕರ್ತನೆ, ದೇವಿಸೃತಿ ಹಾಗೂ ಕೊನೆಯಲ್ಲಿ ಕದನ ಕೂತೂಹಲ ತಿಲ್ಲಾನ, ಶ್ರೀರಾಮಚಂದ್ರನ ಮಂಗಳದೊಂದಿಗೆ ಸುಸಂಪನ್ನವಾಯಿತು. ಅತಿಥಿಗಳಾಗಿ ಕಲಾಯೋಗಿ ಶ್ರೀಮತಿ ರೇಖಾ ಜಗದೀಶ್ (ನರ್ದೇಶಕರು, ಶ್ರೀ ಲಲಿತ ಕಲಾ ನಿಕೇತನ), 'ಕಲಾಯೋಗಿ' ಶ್ರೀ ಎಸ್ . ರಘುನಂದನ್ (ನರ್ದೇಶಕರು ಕೇಶವ ಸಂಗೀತ ಮತ್ತು ನೃತ್ಯ ಶಾಲೆ ಹಾಗೂ ಡಾ॥ ಶ್ರೀಮತಿ ಮಾನಸಿ ರಘುನಂದನ್ (ನರ್ದೇಶಕರು, ಅಭಿವ್ಯಕ್ತಿ ಸಾಂಸ್ಕೃತಿಕ ಸಂಸ್ಥೆ) ನೃತ್ಯ ಕರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಡೀ ಸಭಾಂಗಣ ಕಿರಿಯ, ಹಿರಿಯ ವಿದ್ಯರ್ಥಿ ವೃಂದ , ಕಲಾರಸಿಕರು ಪೋಷಕರಿಂದ ತುಂಬಿ ಕರತಾಡನದಿಂದ ಕಂಗೊಳಿಸಿತು. ಕರ್ಯಕ್ರಮವನ್ನು ಪೋಷಕರಾದ ಡಾ॥ ಕುಮಾರ್ ಮತ್ತು ಶ್ರೀಮತಿ ಎಸ್. ಜಯಶ್ರೀ ಅಚ್ಚುಕಟ್ಟಾಗಿ ನರ್ವಹಿಸಿದರು.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಜೆಡಿಎಸ್ ಮುಖಂಡ ಬಿ ಪುಟ್ಟಸ್ವಾಮಿ ಅವರ 48ನೇ ಹುಟ್ಟುಹಬ್ಬದ ಪ್ರಯುಕ್ತ ಬಿ ಪುಟ್ಟಸ್ವಾಮಿ ಅಭಿಮಾನಿ ಬಳಗ ಸೇವಾ ಟ್ರಸ್ಟ್ ನ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.